ಭಂಡಾರ

ಅರಳಿ ದಳದಳ ಸುರಿಯೆ ರಜಕಣ-ಹರಿಯೆ ಮಧುರಸ ಮೆರೆಯೆ ದುಂಬಿಯು
ತಿರುಳ ಭಾವಕೆ ಹರಿಯೆ ವೀರ್ಯವು ಗೂಢ ತೆರದೊಳಗೆ
ಹೊರಗಣಾರ್ಥಿಕ ಸರದಿ ಕಳೆಯಲು- ಇರದು ಮಧುರಸವಿರದು ಶುಭರಜ
ವಿರದು ರಂಗಿನಪೆಂಪದಾವದು ಬಲಿಯೆ ಬಂಡಾರ.
* * *

ಹೊರಳಿ ಧ್ವಜಪಠ ಸುಳಿದು ಹೊಂಬೊಗೆ
ಹರಿದು ಹೊಗಳಿಕೆ ಮೊರೆಯೆ ಕವಿಗಳು
ಭರತಭುವಿಯಲಿ ವೀರ್ಯ ಹರಿಯಿತು ತಿರುಳಿನಂತರಕೆ
ಹೊರಗಣಾರ್ಥಿಕ ಸರದಿ ಕಳೆಯಿತು!
ಇರದೆ ಹೊಂಬೊಗೆಯಿರದೆ ಹೊಗಳಿಕೆ!
ಸುರಳಿ ಧ್ವಜಪಠ ಸುರಟಿ ಭವಸುಖ ಬಲಿತು ಭಂಡಾರ!
ನಾಡಹೃದಯವು ಸೊರಗಿ ಸುರುಟಿದೆ-ಆಡುವಾಕಳಿಯಿಲ್ಲ ಮೊಗದಲಿ
ನೋಡೆನೆಂಬೊಡೆ ನೆಳಲ ಕಾಣೆನು ಪೂರ್ವ ಶುಭಯುಗದ!
ನಾಡು ಬಲಿತಿಹ ಬೀಜಕೋಶವು-ಬೀಡು ಪೂರ್‍ವದ ಬೀಜ ಭಾಗ್ಯಕೆ!
ನಾಡು ಸೊರಗಿದ ನಾಡು ನಮ್ಮದು! ಬಿರಿವ ಭಂಡಾರ!
ವ್ಯಾಸನಾವಾಲ್ಮೀಕಿ ಮೊದಲಾ- ದೇಸು ಕವಿಗಳು ವಕ್ಕಿ ತೂರುತ
ಭಾಸುರಾತ್ಮಕ ಭಾವವೆಲ್ಲವ ಕಾವ್ಯ ಕಣಜದಲಿ
ಏಸನಿಟ್ಟರೋ! ಯೋಗಮರ್ಮದೊ-ಳಾಸುಯೋಗದ ಸುಗ್ಗಿ ಕಳೆಯಿತು!
ಈಸುಕಾವ್ಯಗಳೆಲ್ಲ ಕೇಳಿರಿ ರತುನ ಭಂಡಾರ!
ಜಂಬುದ್ವೀಪವು ಬಿರಿವಬೊಕ್ಕಸ! ನಂಬಿನಂಬಿರಿ! ನಿಮ್ಮ ಹೃದಯಗ
ಳೆಂಬ ವೋಟೆಗಳೆಲ್ಲ ಬಿರಿವವು ನಾಳೆ ಶುಭಯುಗಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೨
Next post ನವಿಲುಗರಿ – ೫

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys